National News Analysis

27 July 2024, 10:07 AM

ಗಂಗಾವತಿ-ದರೋಜಿ ರೇಲ್ವೆ ಲೈನ್ ಸರ್ವೆ ಕಾರ್ಯಕ್ಕೆ 18 ಲಕ್ಷ ಮಂಜೂರು:ಅಶೋಕಸ್ವಾಮಿ ಹೇರೂರ ಸಂತಸ.

ಗಂಗಾವತಿ:ಗಂಗಾವತಿ-ದರೋಜಿ ನೂತನ ಬ್ರಾಡಗೇಜ್ ರೇಲ್ವೆ ಲೈನ್ ಸರ್ವೆ ಕಾರ್ಯಕ್ಕೆ 18 ಲಕ್ಷ ರೂಪಾಯಿಗಳನ್ನು ಭಾರತೀಯ ರೇಲ್ವೆ ಮಂಡಳಿ ಮಂಜೂರು ಮಾಡಿದೆ.
ಈ ವಿಷಯವನ್ನು ಕೊಪ್ಪಳ ಕ್ಷೇತ್ರದ ಲೋಕ ಸಭಾ ಸದಸ್ಯ ಸಂಗಣ್ಣ ಕರಡಿಯವರ ಸರಕಾರದ ಕಾರ್ಯದರ್ಶಿ ಜೋಷಿ ಖಚಿತಪಡಿಸಿದ್ದಾರೆಂದು ಕೊಪ್ಪಳ ಜಿಲ್ಲಾ ವಾಣಿಜ್ಯೋದ್ಯಮ ಮತ್ತು ಕೈಗಾರಿಕಾ ಸಂಸ್ಥೆಯ ಅದ್ಯಕ್ಷ ಅಶೋಕಸ್ವಾಮಿ ಹೇರೂರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಅಶೋಕಸ್ವಾಮಿ ಹೇರೂರ,ಸಂಸದ ಸಂಗಣ್ಣ ಕರಡಿಯವರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.
ಆದಷ್ಟು ಬೇಗ ಸರ್ವೆ ಕಾರ್ಯ ಮುಗಿದು,ಕಾಮಗಾರಿ ಆರಂಭವಾಗುವ ನಿರೀಕ್ಷೆಯನ್ನು ಹೊಂದಿದ್ದು ಈ ವಿಷಯವಾಗಿ ಬೆಂಬಲಿಸಿದ ಎಲ್ಲಾ ಜನ ಪ್ರತಿನಿಧಿಗಳಿಗೆ ಹೇರೂರ ಧನ್ಯವಾದಗಳನ್ನು ಹೇಳಿದ್ದಾರೆ.

Vinkmag ad

Read Previous

HAL MEDICON 2022: Renowned Cardiologist Warns of Rising Cardiac Related Deaths in India, Calls for Timely Interventions

Read Next

Leave a Reply

Your email address will not be published. Required fields are marked *

five × two =

Most Popular